
ಅಪರೂಪಕ್ಕೆ ನಮ್ಮ ದುಬೈ ಹುಡುಗ BK (read it as bundle king) ತುಂಬಾ ಬಿಡುವು ಮಾಡಿಕೊಂಡು ನೆನ್ನೆ ಮನೆಗೆ ಬಂದಿದ್ದ. ನಮಗೆ ಗೊತ್ತು ಅವನು ಸರಿಯಾಗೇ ಕೊರೀತಾನೆ ಅಂತ, ಅವನ ಹೆಸರಿಗೆ ಮೋಸ ಆಗದ ಹಾಗೆ ಸರಿ ಕೊರ್ದಾ. ಅಷ್ಟರಲ್ಲೇ ನಮ್ಮ V.P. ವಾಸು ಕೂಡ ಮನೆಗೆ ಬಂದ. ಯಾರೀಗೂ ಎಣ್ಣೆ ಹೊಡೆಯುವ ಮನಸ್ಸಿರಲಿಲ್ಲ (ನನಗೆ ಮನಸ್ಸಿತ್ತು, ಆದರೆ ಒಬ್ಬನೇ ಹೊಡಿಯೋದು ಬೇಡ ಅಂತ ಸುಮ್ನಾದೆ). ನಾನು, ಮಂಜ, ವಾಸು, BK, ಲಾಟನ್ ಊಟ ಮಾಡಿ ಮನೆಗೆ ಬಂದ್ವಿ. ವಾಸು ವಾಪಸ್ ತನ್ನ ಮನೆಗೆ ಹೋದ. ಮನೇಲಿ current ಇಲ್ಲ್ರ ಕಾರಣ ನಾವು terrace ಮೇಲೆ ಕೂತು ಮಾತಾಡ್ತಿದ್ವಿ, ಆಗ ತೇಜು ಮನೆಗೆ ಬಂದ. ಹಾಗೆ ಏನೇನೋ ಮಾತು-ಕಥೆ ನಡೀತಿತ್ತು. ಅಷ್ಟರಲ್ಲಿ ನಮ್ಮ ಮಂಜಂಗೆ ನಾನು ನೆನ್ನೆ ಸಕಲೇಶಪುರಕ್ಕೆ ಹೋಗೋ ಚೂಲಲ್ಲಿ ಇದ್ದೆ ಅನ್ನೋದು ನೆನಪಾಯ್ತು.
ನನಗಿದ್ದ ಚೂಲಿನ ವಿಷಯ ಕೇಳಿದ್ದೆ ತಡ, BK 'ಬನ್ರೋ ಎಲ್ಲಾದ್ರೂ ಹೋಗೋಣ' ಅಂದ. ನಾನು ಈ ಒಂದು ಆಮಂತ್ರಣಕ್ಕೆ ಕಾಯ್ತಿದ್ದೆ. ತಕ್ಷಣ ಹೊರಟ್ವಿ. ಎಲ್ಲಿಗೆ ಅನ್ನೋದು ನಾವು ಎಂದೂ ನಿರ್ಧಾರ ಮಾಡಲ್ಲ. ಕಾರಲ್ಲಿ ಕೂತ ಮೇಲೆ ಅದೆಲ್ಲ ಮಾತು-ಕಥೆ.
ಮೊದಲು ಮದ್ದೂರ್ ಕಾಫೀ ಡೇ ಅಂದ ನಮ್ಮ BK. ಅಲ್ಲಿಗೆ ಎಷ್ಟು ಸಾರಿ ಹೋಗಿದೀವಿ ಅನ್ನೋ ಲೆಕ್ಕಾನೆ ಇಲ್ಲದ ನಮಗೆ ಆ ಜಾಗ ತುಂಬಾ ಹಳತ್ತು ಅನ್ಸ್ತು. ಹೊಸ ಜಾಗ ಅಂದ್ರೆ ವಿಮಾನ ನಿಲ್ದಾಣ ಅಂತ ನಿರ್ಧಾರ ಮಾಡಿ ಅಲ್ಲಿಗೆ ಹೋಗೋ ಯೋಜನೆಲಿ ಕಾರ್ ಹೊರಗೆ ತೆಗ್ದೆ. ಕಾರ್ ಅಲ್ಲಿ ಇದ್ದ ಪೆಟ್ರೋಲ್ ತುಂಬ ಕಮ್ಮಿ. ಅದರಲ್ಲೂ ನಮ್ಮ ಮಂಜ ಆ ಪೆಟ್ರೋಲ್ ಬಂಕ್, ಈ ಪೆಟ್ರೋಲ್ ಬಂಕ್ ಅಂತ ಸಲಹೆ ಕೊಟ್ಟು ಸುಮಾರು ೧ ಲೀಟರ್ ಪೆಟ್ರೋಲ್ ಹಾಳು ಮಾಡಿಸಿದ. ಹೇಗೋ ಕೊನೆಗೆ ಒಂದು ಬಂಕ್ ಸಿಕ್ತು, ಅಲ್ಲಿ ಪೆಟ್ರೋಲ್ ಹಾಕ್ಸಿ ಹೊರಗೆ ಬಂದಾಗ ನನಗೆ ನೆನಪಾಗಿದ್ದು ಚನ್ನಪಟ್ಟಣದ ಬಳಿ ಇರೋ 'ಬರಿಸ್ತ'. ಹಿಂದೆ ಕೂತಿದ್ದ ಮಂಜ, ಲಟಾನ್ ಮತ್ತು BK ಗೆ ಗೊತ್ತಾಗದ ಹಗೆ ನಾನು, ತೇಜು ನಿರ್ಧಾರ ಮಾಡಿದ್ವಿ 'ಬರಿಸ್ತ' ಹೋಗುವ ಅಂತ.
'ಬರಿಸ್ತ' ಹೋಗಿ ಕೂತಿದ್ದೆ ತಡ, ಅಲ್ಲಿ ನಮ್ಮ BK ತಮ್ಮ ಸಿರೀಶ್ ಬಂದ ಅವನದೊಂದು ಗ್ಯಾಂಗ್ ಜೊತೆ. ಒಟ್ಟಾರೆ ಹತ್ತು ಜನ, ಹತ್ತೂ ಜನ ಹುಡುಗರೇ, ಕೂತು ಸಾವಿರಕ್ಕೋ ಮಿಗಿಲಾಗೋ ಅಷ್ಟು ದುಡ್ಡಿಂದು ಕಾಫೀ ಕುಡಿದ್ವಿ.
ವಾಪಸ್ ಹೊರಟಾಗ ಒಂದು ಜಾಗದಲ್ಲಿ ನಿಟ್ಟು ಫೋಟೋ ತೆಗಿಯೋಣ ಅನ್ಸ್ತು, ನನ್ನ SLR ಕ್ಯಾಮೆರಾಗೆ ಮೋಸ ಮಾಡಬಾರದಲ್ಲ ಆ ಕಾರಣಕ್ಕಾಗಿ.

ನಾವು ಈ ಫೋಟೋ ತೆಗಿತಿರ್ಬೇಕಾದ್ರೆ ಇನ್ನೊಂದು ಕಾರ್ ಅಲ್ಲಿ ಇದ್ದ ಸಿರೀಶ್ ಫೋನ್ ಮಾಡಿದ, ಅವನಿಗೆ ಮುಂದೆ ಎಲ್ಲಾದ್ರೂ ಚಹಾ ಅಂಗಡಿ ಬಳಿ ನಿಲ್ಲೋಕೆ ಹೇಳಿದ್ವಿ. ನಮಗೆ ಕಾಫೀ ಡೇ ಆಗ್ಲಿ ಬರಿಸ್ತ ಆಗ್ಲಿ, ಕುಡಿದ ಕಾಫೀ ಅರಗಬೇಕಂದ್ರೆ ಒಂದು ಕಾಕ ಅಂಗಡಿ ಚಹಾ ಬೇಕು. ನಿಲ್ಸಿ ಚಹಾ ಕುಡೀತ ಮತ್ತಷ್ಟು ಫೋಟೋ ತೆಗೆದ್ವಿ. ಹತ್ತೂ ಜನ ಇರೋ ಫೋಟೋ ಸ್ವಲ್ಪ ಚೆನ್ನಾಗಿದೆ. ಅದನ್ನ ತೋರ್ಸೋ ಸಲುವಾಗೆ ನಾನು ಈ ಇಡೀ ಬ್ಲಾಗ್ ಬರೆದದ್ದು.




